ಧರಣೀಶ್ರವರು ಶಿಕ್ಷಕರು, ತಮ್ಮ ಪತ್ನಿ ಹಾಗು ಮಗನೊಂದಿಗೆ ತರೀಕೆರೆ, ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಸರಳವಾಸ್ತು ಅಳವಡಿಸುವುದಕ್ಕಿಂತ ಮೊದಲು ಸಾಕಷ್ಟು ಸಮಸ್ಯೆಗಳಿದ್ದವು. ಮುಖ್ಯವಾಗಿ ಗಂಡ-ಹೆಂಡತಿ ಜಗಳ ಹಾಗು ಹಣಕಾಸಿನ ಸಮಸ್ಯೆ. ಡೈವೋರ್ಸ ಹಂತಕ್ಕೆ ಹೋಗಿದ್ದ ಇವರ ಸಂಬಂಧ ಸರಳವಾಸ್ತುವಿನ ನಂತರ ಸುಧಾರಣೆಗೊಂಡಿದೆ. ಹಾಗೆಯೇ ಆಂತರಿಕ ಸಮಸ್ಯೆಯು ನಿವಾರಣೆಯಾಗಿ ಸರಳವಾಸ್ತುವಿನ ನಕ್ಷೆಯ ಪ್ರಕಾರ ತುಂಬಾ ಸುಂದರವಾದ ಮನೆಯನ್ನು ಕೇವಲ 8 ತಿಂಗಳೊಳಗೆ ಮುಗಿಸಿದ್ದಾರೆ. ಒಂದು ರೂಪಾಯಿ ಹಣವಿಲ್ಲದೇ ಇಂದು 40 ಲಕ್ಷ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಸ್ವತಃ ಧರಣೀಶ್ರವರೇ ಆಶ್ಚರ್ಯ ಪಡುತ್ತಿದ್ದಾರೆ.
ಅಲ್ಲದೇ ಸರಳವಾಸ್ತುವಿಗಿಂತ ಮೊದಲು ಅನಾರೋಗ್ಯ ಸಮಸ್ಯೆ ಧರಣೀಶ್ ಹಾಗು ತ್ರಿವೇಣೆಯವರ ಸಂಸಾರವನ್ನು ಬಿಟ್ಟು ಬಿಡದಂತೆ ಕಾಡುತ್ತಿತ್ತು. ತಿಂಗಳಲ್ಲಿ 15 ದಿವಸ ಆಸ್ಪತ್ರೆಯಲ್ಲಿಯೇ ಇರುವ ಪರಿಸ್ಥಿತಿ ಇವರದ್ದಾಗಿತ್ತು. ಈಗ ಎಲ್ಲವೂ ಚೆನ್ನಾಗಿದೆ. ಇವರ ನೆಮ್ಮದಿಗೆ ಕಾರಣವಾದ ಗುರೂಜಿಯವರನ್ನು ಇವರು ದಿನನಿತ್ಯ ನೆನಪಿಸಿಕೊಂಡು, ಪೂಜ್ಯ ಭಾವನೆಯಿಂದ ನೋಡುತ್ತಿದ್ದಾರೆ.

