ಸರ್ವೆ ಸಾಮಾನ್ಯವಾಗಿ ಎಲ್ಲರೂ ಮದುವೆಗೆ ಕನ್ಯೆಯನ್ನು ತೋರಿಸುವಾಗ ಉತ್ತರ ಮತ್ತು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳ್ಳಿರಿಸುವ ಸಂಪ್ರದಾಯವಿದೆ. ಹಲವಾರು ವಾಸ್ತು ಪುಸ್ತಕಗಳಲ್ಲಿ ಇದರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಆದರೆ ನಾನು ಮೊದಲೇ ತಿಳಿಸಿದಂತೆ ಒಂದು ವೇಳೆ ಯುವತಿಗೆ ಪೂರ್ವ ಹಾಗೂ ಉತ್ತರ ದಿಕ್ಕು ಕೆಟ್ಟ ದಿಕ್ಕುಗಳಲ್ಲಿ ಬಂದಿದ್ದರೆ ಮದುವೆಯು ಆಗುವುದು ಮುಂದೂಡುತ್ತಾ ಹೋಗುವುದರ ಮೂಲಕ ತಂದೆ ತಾಯಿಯರ ಆತಂಕಕ್ಕೆ ಕಾರಣವಾಗುತ್ತದೆ. ಇದರೊಂದಿಗೆ ಮನೆಯಲ್ಲಿರುವ ಸಂಬಂಧದ ಸ್ಥಾನದಲ್ಲಿ ತೊಂದರೆ ಇದ್ದರೆ ಮದುವೆಯಲ್ಲಿ ತೊಂದರೆ ಉಂಟಾಗುವುದು. ಸರಳ ವಾಸ್ತುವನ್ನು ಅಳವಡಿಸುವುದರ ಮೂಲಕ ಈ ತೊಂದರೆಗಳಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಇಲ್ಲಿ ಸಂಕೇಶ್ವರದ ಹತ್ತಿರ ಇರುವ ಓರ್ವ ಗೌಡರ ಮನೆಯಲ್ಲಿಯ ಉದಾಹರಣೆ ನೀಡಲಿಚ್ಛಿಸುತ್ತೇನೆ. ಸಂಕೇಶ್ವರದ ಗೌಡರು ಸರಳ ವಾಸ್ತು ಸೇವೆಯನ್ನು ಅಪೇಕ್ಷಿಸಿ ಸರಳ ವಾಸ್ತು ತಜ್ಞರನ್ನು ಮನೆಗೆ ಕರೆಯಿಸಿದ್ದರು. ಸಂಸ್ಥೆಯ ವಾಸ್ತು ತಜ್ಞರು ಆ ಮನೆಯನ್ನು ಪರೀಕ್ಷಿಸಿದಾಗ ಮನೆಯಲ್ಲಿ ಸಂಬಂಧದ ಸ್ಥಾನದಲ್ಲಿ ತೊಂದರೆ ಇರುವುದು ತಿಳಿದು ಬಂದಿತು.
ಹಾಗೆ ಆ ಯುವತಿಯ ಜನ್ಮ ದಿನಾಂಕವನ್ನು ನೋಡಿದಾಗ ಯುವತಿಗೆ ಪೂರ್ವ ಹಾಗೂ ಉತ್ತರ ಎರಡೂ ದಿಕ್ಕುಗಳು ಕೆಟ್ಟ ದಿಕ್ಕಿನಲ್ಲಿ ಬರುತ್ತಿದ್ದವು. ಹೀಗಾಗಿ ಯಾವಾಗ ಯುವತಿಯನ್ನು ಉತ್ತರಕ್ಕೆ ಅಭಿಮುಖವಾಗಿ ತೋರಿಸುತ್ತಿದ್ದರೋ ಆಗ ಆ ಯುವತಿಯ ಮದುವೆಯಲ್ಲಿ ತೊಂದರೆ ಬರುತ್ತಿತ್ತು. ಸಂಸ್ಥೆಯ ತಜ್ಞರು ಯುವತಿಯ ಮಲಗುವ ಕೋಣೆಯನ್ನು ಪರೀಕ್ಷಿಸಿ ಅಲ್ಲಿಯೂ ಕೆಲವೊಂದು ಸಲಹೆ ನೀಡಿ ಯುವತಿಯನ್ನು ಮುಂದೆ ವರನು ನೋಡಲು ಬಂದಾಗ ಪಶ್ಚಿಮಕ್ಕೆ ಅಭಿಮುಖವಾಗಿ ತೋರಿಸಲು ತಿಳಿಸಿದರು. ಆಗ ಗೌಡರು “ನೀವೇನು ಸರ್, ಉತ್ತರಕ್ಕೆ ಅಭಿಮುಖವಾಗಿ ತೋರಿಸುವ ಸಂಪ್ರದಾಯವನ್ನು ಬಿಟ್ಟು ಪಶ್ಚಿಮಕ್ಕೆ ಅಭಿಮುಖವಾಗಿ ತೋರಿಸಲು ಹೇಳುತ್ತಿದ್ದೀರಿ. ಇದು ಹೇಗೆ ಸಾಧ್ಯ” ಎಂದು ಮರು ಪ್ರಶ್ನಿಸಿದರು. ನಮ್ಮ ಸಂಸ್ಥೆಯ ತಜ್ಞರು ಆಗ ಅವರಿಗೆ ಹುಡುಗಿಯ ಮದುವೆ ಆಗಬೇಕೆಂದರೆ ನಾವು ತಿಳಿಸಿದಂತೆಯೇ ಮಾಡಬೇಕಾಗುತ್ತದೆ ಎಂದು ಖಡಾ ಖಂಡಿತವಾಗಿ ತಿಳಿಸಿದರು. ತಜ್ಞರ ಖಡಾ ಖಂಡಿತ ನುಡಿಯನ್ನು ಆಲಿಸಿದ ಯಜಮಾನರು ನಂತರ ಬಂದ ಎರಡು–ಮೂರು ಸಂಬಂಧದವರಿಗೆ ಪಶ್ಚಿಮಾಭಿಮುಖವಾಗಿಯೇ ಹುಡುಗಿಯನ್ನು ಕುಳ್ಳಿರಿಸಿ ತೋರಿಸಿದರು. ಮೂರನೇ ಪ್ರಯತ್ನದಲ್ಲಿಯೇ ಹುಡುಗಿಯ ಮದುವೆಯ ನಿಶ್ಚಯವಾಗಿ ಮದುವೆಯು ಕೂಡ ನಡೆದು ಹೋಯ್ತು. ನಮ್ಮ ಸಂಸ್ಥೆಗೆ ಮದುವೆಯ ಕರೆಯೋಲೆ ಕಳುಹಿಸಿದ ಗೌಡರು ಇನ್ನೂ ಒಂದು ವಿಷಯವನ್ನು ಬರೆದಿದ್ದರು. ಅದೇನೆಂದರೆ “ನಾವೆಂದು ನಿಮಗೆ ಚಿರಋಣಿಗಳು“ಈಗ ಸದರಿ ಯುವತಿಯು ಪತಿಯೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿದ್ದಾಳೆ.
ಈ ರೀತಿಯ ಉದಾಹರಣೆಯನ್ನು ನಾನು ತುಂಬಾ ಕೊಡಬಲ್ಲೆ. ಸಾವಿರಾರು ಯುವತಿಯರ ಕಣ್ಣಿರನ್ನು ಸರಳ ವಾಸ್ತುವಿನ ಮೂಲಕ ಪರಿಹರಿಸಿದ ಸಂತೃಪ್ತಿ ನನ್ನ ಪಾಲಿಗಿದೆ. ಆ ಅಕ್ಕ ತಂಗಿಯರ ಆಶೀರ್ವಾದವೇ ನನಗೂ ನನ್ನ ಸಂಸ್ಥೆಯ ವಾಸ್ತು ತಜ್ಞರಿಗೂ ಎಷ್ಟೇ ಹಣ ನೀಡಿದರೂ ಸಿಗಲಾರದ ಅಮೂಲ್ಯ ಆಸ್ತಿ ಎಂದೇ ನಾನು ಭಾವಿಸಿದ್ದೇನೆ.








